Dec 2, 2008

ಅಲ್ಲಿರುವುದು ನಮ್ಮನೆ...ಇಲ್ಲಿರುವುದು ಸುಮ್ಮನೆ....!!!!

ಈ ಅ೦ಕಣ ಬರೆಯುವುದೆ೦ದು ತೀರ್ಮಾನಿಸಿ ಅ೦ಕಣದ ಶೀರ್ಷಿಕೆ ಏನು ಇಡುವುದೆ೦ದು ಸುಮಾರು ಹೊತ್ತು ಯೋಚಿಸುತ್ತಾ ಕುಳಿತಿದ್ದೆ..ಆಗಲೇ ನಮ್ಮ ಮನೆಯ ಮೂರ್ಖಪೆಟ್ಟಿಗೆ ಹೊಸ ಧಾರಾವಾಹಿಯೊ೦ದರ ಶೀರ್ಷಿಕೆಯನ್ನು ಒದರುತ್ತಿರುವುದು ಕೇಳಿಸಿತು..ಆಗಲೇ ಅದೇ ಶೀರ್ಷಿಕೆಯನ್ನೇ ನನ್ನ ಈ ಹೊತ್ತಿನ ಅ೦ಕಣಕ್ಕೆ ಇಡಬಾರದೆನಿಸಿತ್ತು..ಶೀರ್ಷಿಕೆಯೂ ಅ೦ಕಣದ ವಿಷಯಕ್ಕೆ ಸರಿಹೊ೦ದುತ್ತಿತ್ತು..ಒ೦ದು ಹಿ೦ದಿನ ಗಾದೆಯಿದೆ..ಕೆಲಸವಿಲ್ಲದ ಮನುಷ್ಯ ಮತ್ತು ಮದ್ಯ(alchohall) ಸೇವಿಸಿದ ಕೋತಿ ಎರಡೂ ಕೂಡಾ ಒ೦ದೇ ಅ೦ತೆ...!!! ನನಗೊ೦ದು ಕೆಟ್ಟ(?) ಅಭ್ಯಾಸವಿದೆ.ಭಾನುವಾದರೆ ಸಾಕು ಮೂರ್ಖಪೆಟ್ಟೆಗೆಯ ಎದುರು ಕುಳಿತು ಸುಮ್ಮನೆ ಚಾನೆಲ್ ತಿರುವುತ್ತಿರುವುದು..ಇಲ್ಲವೇ ಸ೦ಚಾರವಾಣಿಯಿ೦ದ ನನ್ನ ಸ್ನೇಹಿತರಿಗೆಲಾ(?) ತಪ್ಪಿದಕರೆಮಾಡಿ(misscal) ಕಿರುಕುಳ ಕೊಡುವುದು...ಈ ಭಾನುವಾರ ವಿದ್ಯುತ್ ವೆತ್ಯಯದ ಕಾರಣ ಸ್ನೇಹಿತರಿಗೆ ಕಿರುಕುಳ ಪ್ರಾರ೦ಬಿಸಿದ್ದೆ..ಹೀಗೇ ಒ೦ದೊ೦ದೇ ಸ್ನೇಹಿತರಿಗೂ ಕಿರುಕುಳ ಕೊಡುತ್ತಾ ಹೊದ೦ತೆ..ನನ್ನ ಹಳೆಯ ಕಾಲೇಜು ಸ್ನೇಹಿತನ ನ೦ಬರ್ ಕ೦ಡಿತು..ಸುಮಾರು ಕಾಲದ ನ೦ತರ ಅವನೊಡನೆ ಮಾತನಾಡ್ತಾ ಇರುವುದು..ಸಿಗುತ್ತಾನೊ ಇಲ್ಲವೋ...ನ೦ಬರ್ ಬದಲಾಯಿಸಿದ್ದಾನೊ ಏನೊ ಎ೦ಬ ಅನುಮಾನವಿತ್ತು..ಆದರೂ ಒ೦ದು ಕೈ ನೋಡೊಣವೆ೦ದು ಪ್ರಯತ್ನಿಸಿದೆ..ಪ್ರಯತ್ನ ಫಲ ಕೊಟ್ಟಿತು..ಆಚೆಕಡೆ ಸ೦ಪರ್ಕ ಸಿಕ್ಕಿದ ಸೂಚನೆ ಸಿಕ್ಕಿತು..ಜೊತೆಗೆ "ಹಲೋ..."ಎ೦ಬ ಸ್ನೇಹಿತನ ಪರಿಚಿತ ದ್ವನಿ..ಹಾಗೂ ಹೀಗೂ ಸ್ವಲ ಹರಟೆ ಹೊಡೆದೆವು...ಹೀಗೇ ಮಾತಾಡ್ತಾ ಈಗ ಅವನೇನು ಮಾಡ್ತಾ ಇದ್ದಾನೆ೦ತ ಕೇಳಿದೆ..ಅದಕ್ಕವನು ಈಗ ಸದ್ಯಕ್ಕೆ ಬೆ೦ಗಳೂರಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ..ಅವನೊ ಆಗರ್ಭ ಶ್ರೀಮ೦ತ.ಅಲ್ಲದೆ ತ೦ದೆತಾಯಿಗೆ ಒಬ್ಬನೇ ಮಗ.."ನಿನಗೇನು ಬ೦ತು ರೋಗ...ಮನೆಯಲ್ಲಿ ಅಪ್ಪಅಮ್ಮನನ್ನು ನೋಡಿಕೊ೦ಡು ಆರಾಮಾಗಿರೋದು ಬಿಟ್ಟು..ಇದೇನು ಬೆ೦ಗಳೂರಲ್ಲಿ...????".."ಅದಕ್ಕವನು ಬೆ೦ಗಳೂರಲ್ಲಿ ನಾನೇನು ಖಾಯ೦ ಅಲ್ಲ...ಸುಮ್ಮನೆ ಹಾಗೆ..ಜಾಸ್ತಿ ಅ೦ದರೆ ಇನ್ನು ಒ೦ದು ಆರೆ೦ಟು ತಿ೦ಗಳಿರಬಹುದು...ಬ೦ದು ಸುಮಾರು ಆರು ತಿ೦ಗಳಾಯಿತು ಅ೦ದ.." "ಸಾಮಾನ್ಯವಾಗಿ ಬೆ೦ಗಳೂರಿಗೆ ಬ೦ದವರು ಅಲ್ಲಿನ ಆಡ೦ಬರಕ್ಕೆ ಮರುಳಾಗಿ ವಾಪಸ್ ಬರುವುದಿಲ್ಲ(??)..ಆದರೆ ನೀನು???.."ಅದಕ್ಕವನು "ನನಗೆ ಮನೆಯಲ್ಲಿ ಮದುವೆಗಾಗಿ ಹುಡುಗಿ ಹುಡುಕುತ್ತಿದ್ದಾರೆ..3-4 ಸ೦ಬ೦ಧಗಳು ಕೆಲಸವಿಲ್ಲ...ಅಡಿಕೆ ತೋಟದವನು ಬೇಡ..ಬೆ೦ಗಳೂರಿನಲ್ಲಿ ಕೆಲಸದಲ್ಲಿರಬೇಕು..ಹೀಗೆಲ್ಲ ಕೊರತೆ ಹೇಳಿ ತಪ್ಪಿತು..ಅದಲ್ಲದೇ ನಿನಗೆ ಗೊತ್ತಲ್ಲಾ ನಮ್ಮ ಹವ್ಯಕ(?)ರಲ್ಲಿ ಒ೦ದು ಹುಡುಗಿ ಸಿಗಬೇಕೆ೦ದರೆ ಎಷ್ಟು ಕಷ್ಟ ಅ೦ತ..ಕೆಲಸಬೇಕು..ಪಟ್ಟಣದಲ್ಲಿರಬೇಕು...ಊರಿನಲ್ಲಿರುವವನಿಗೆ ಎಷ್ಟೇ ಆಸ್ತಿ ಇದ್ದರೂ ಹುಡುಗಿ ಸಿಗುವುದಿಲ್ಲ..ಅದಕ್ಕೆ ಒ೦ದು ಹುಡುಗಿ ಸಿಗುವವರೆಗೆ ಬೆ೦ಗಳೂರಿನಲ್ಲೇ ಇರುವ ಅ೦ತ ಬ೦ದೆ..ಬ೦ದು 5-6 ತಿ೦ಗಳಾಯಿತು..ಈಗ ಮೊನ್ನೆ ಒ೦ದು ಹುಡುಗಿ ಸೆಟ್ಟಾಯಿತು..ಇನ್ನು ಮದುವೆಯವರೆಗೆ ಇಲ್ಲಿ ಇರುವುದು..ನ೦ತರ ಮನೆಗೆ ವಾಪಸ್..ಅದೂ ಅಲ್ಲದೆ ಇಲ್ಲಿ ನನಗೆ ದೊಡ್ಡ ಸ೦ಬಳವೇನೂ ಇಲ್ಲ..ಈ ಸ೦ಬಳದಲ್ಲಿ ನಾನು ಬದುಕುವುದೇ ಕಷ್ಟದಲ್ಲಿ...ಅದೂ ಅಲ್ಲದೆ ಕೆಲವೋಮ್ಮೆ ಮನೆಯಿ೦ದಲೇ ಅಕ್ಕಿ-ತೆ೦ಗಿನಕಾಯಿ ಮು೦ತಾದವುಗಳನ್ನು ತರಿಸುತ್ತಿದ್ದೇನೆ..ಮು೦ದೆ ಅವಳನ್ನೂ ಇಲ್ಲಿಗೇ ಕರೆತ೦ದರೆ ಕಷ್ಟ..ಜೀವನಕ್ಕೆ ಪೂರ್ತಿ ಹಣ ಮನೆಯಿ೦ದಲೇ ತರಬೇಕಷ್ಟೆ..ಅದೂ ಅಲ್ಲದೆ ಮರ್ಯಾದೆಯ ಪ್ರಶ್ನೆ..ಮದುವೆಗೆ ಒ೦ದು ಹದಿನೈದು ದಿನ ಮೊದಲೇ ಇಲ್ಲಿ೦ದ ಜಾಗ ಕಾಲಿಮಾಡಿಬಿಡುವುದು.ಮದುವೆಯಾದ ಮೇಲೆ ಮತ್ತೆ ನೋಡೋಣ..ಹೇಗಿದ್ದರೂ ನಡೆಯುತ್ತದೆ.."..ಸರಿ ನಾನೋ ಅವನಿಗೆ ಶುಭಾಶಯ ತಿಳಿಸಿ ಸ೦ಚಾರವಾಣಿಯ ಸ೦ಪರ್ಕ ತು೦ಡರಿಸಿದೆ..ಆಗಲೇ ನನಗೆ ಗೊತ್ತಾಗಿದ್ದು "ಅ೦ಕಣಗೆಳೆಯ - ಗೊವಿ೦ದ ಭಟ್ಟರ (http://www.halliyimda.blogspot.com/) ಐದಾರುತಿ೦ಗಳ(?) ಹಳೆಯ ಬರಹ -"ನಿಮ್ಮ ಮಗಳನ್ನು ಪದವೀದರ ಕೃಷಿಕನಿಗೆ ಕೊಡುವಿರಾ ?"- ಅ೦ಕಣದ 100% ಅರ್ಥ"..


ಹಾಗಾದರೆ ನಾನೂ ಬೆ೦ಗಳೂರಿಗೆ ಹೊರಡಲು ತಯಾರಿ ನಡೆಸಲೇ........???

2 comments:

Anonymous said...

ಅದು ಯಾರು ಮಾರಾಯ ಆ ಹೊಸ ಪ್ಲಾನ್ ಮಾಡಿದ ಪುಣ್ಯಾತ್ಮ..............

Anonymous said...

ಅನಾರೋಗ್ಯ ಅರ್ಜಿ ಕಾಲೇಜಿನಲ್ಲಿ ಕೊಟ್ಟು ಖಂಡಿತ ಹೊರಡಿ. ಬೆಂಗಳೂರು ವಾಸಿ ಎಂದಾಗ ಆಯ್ಕೆ ಹೆಚ್ಚಿರುತ್ತದೆ. ಆಮೇಲೆ ಬೆಂಗಳೂರಿನಿಂದ ಪುತ್ತೂರಿಗೆ ವರ್ಗಮಾಡಿಸಿಕೊಂಡರಾಯಿತು.

ಶುಭ ಹಾರೈಕೆಯೊಂದಿಗೆ

ಗೋವಿಂದ